ಮಾರ್ಸ್ಇಂಕ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಚಿತ್ರ ‘ಶ್ರೀನಿವಾಸ ಕಲ್ಯಾಣ’ ಶ್ರಾವಣ(ಆಗಸ್ಟ್)ದಲ್ಲಿ ಆರಂಭವಾಗಲಿದೆ. ಹಿಂದೆ ‘ಸಿಂಪ್ಲಿ ಕೈಲಾಸಂ’ ಎಂಬ ಕಿರುಚಿತ್ರ ಹಾಗೂ ಸೂಪರ್ಸ್ಟಾರ್ ಉಪೇಂದ್ರ ಅಭಿನಯದ ‘ಟೋಪಿವಾಲ‘ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್(ಶ್ರೀನಿ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ನಿರ್ದೇಶಕರಾಗಿದ್ದ ಶ್ರೀನಿವಾಸ್ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ನಿಖಿಲಾರಾವ್, ಅಚ್ಯುತರಾವ್, ಸಂಜಯ್ಶಾಸ್ತ್ರಿ, ದಿವ್ಯಾವೆಂಕಟರಾಂ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಸಕಲೇಶಪುರ, ಕೊಡಚಾದ್ರಿ, ಚಾರ್ಮುಡಿ ಮುಂತಾದ ಕಡೆ ಎರಡು ಹಂತಗಳಲ್ಲಿ ನಡೆಯಲಿದೆ. ಅಶ್ವಿನ್ ಕದಂಬೂರ್ ಛಾಯಾಗ್ರಹಣ, ರಘುತಾಣಿ ಸಂಗೀತ ನಿರ್ದೇಶನ, ಇಮ್ರಾನ್ ನೃತ್ಯ ನಿರ್ದೇಶನ ಹಾಗೂ ವಿಕ್ರಂಶ್ರೀಧರ್ ಅವರ ಸಂಕಲನ ‘ಶ್ರೀನಿವಾಸ ಕಲ್ಯಾಣ’ ಚಿತ್ರಕ್ಕಿದೆ.